Monday, July 30, 2007

ಅನಿಸಿಕೆ

ಎಷ್ಟೊಂದು ದಿನದಿಂದ ಬರೆಯಬೇಕು ಎನ್ನುವ ಹಂಬಲ.ಇದಕ್ಕೆ ಸ್ಪೂರ್ತಿ ರಾಜೀವ.ಅವರು ಯಾವಾಗಲು ಏನಾದರು ಬರೆಯಲು ಪ್ರೇರೇಪಿಸುತಿದ್ದರು.ನಮಗಾಗಿ ಬ್ಲೊಗ್ ರಚಿಸಿದವರು ಅವರೆ!
ಯಾವಗಲೂ ನನ್ನ ಮನಸ್ಸಿಗೆ ಬೇಸರವಾದಾಗ,ಕೋಪದಲ್ಲಿದ್ದಾಗ ವಿವಿದ (ಒಳ್ಳೆಯ)ವಿಚಾರಗಳು ಮನಸ್ಸಿಗೆ ತೋಚುತ್ತವೆ.ಆ ಸಮಯದಲ್ಲಿ ಕುಳಿತು ಏನಾದರು ಬರೆದಲ್ಲಿ ಒಂದು ಒಳ್ಳೆ ಲೇಖನ ಬರೆಯಬಹುದು ಎಂಬುದು ನನ್ನ ಅನಿಸಿಕೆ.ಆದರೆ ಬೇಸರ/ಕೋಪದಲ್ಲಿದ್ದಾಗ ಬರೆಯಲಿಕ್ಕೆ ಸಾಧ್ಯಾನಾ??ಹಾಗೆ ಬರೆಯಲು ಕೂತಮೇಲೆ ಬೇಸರ/ಕೋಪ ಮಾಯವಾಗಬಹುದಲ್ಲವೆ?ಜೊತೆಯಲ್ಲೆ ಎಲ್ಲಾ ವಿಚಾರಗಳೂ ಕೂಡಾ! (ಹೀಗಿದ್ದಲ್ಲಿ ನಾನು ಒಳ್ಳೆಯ ಲೇಖನ ಬರೆಯುವುದು ಯಾವಾಗ?!!)
ಏನಾದರು ಬರೆಯಲು ಪ್ರಾರಂಭಿಸೋಣವೆಂದುಕೊಂಡು ಕಿ ಬೋರ್ಡ್ ಮುಂದೆ ಕೂತಿದ್ದೇನೆ.ಅಂಬೆಗಾಲಿಡುವ ಮಗು ನಡೆಯಲು ಪ್ರಯತ್ನಿಸಿದಂತಿದೆ ನನ್ನ ಈ ಅನುಭವ...... ಚೇತನಾ ರೋಹಿತ್

Read More...